1. ಬೆ೦ಗಳೂರಿನಲ್ಲಿ ತನಗೆ ಕೆಲಸ ಸಿಕ್ಕಿತ್ತು ,ಅಲ್ಲೆ ಒ೦ದು ಪುಟ್ಟಮನೆ ಮಾಡಿ , ಹಳ್ಳಿಯಲ್ಲಿದ್ದ ತನ್ನ ಹೆ೦ಡತಿ ಮತ್ತು ಮಗುವನ್ನು ತನ್ನ ಮನೆಗೆ ಕರೆದೆ ಬರುವಷ್ಟರಲ್ಲಿ , ಅವರಿಬ್ಬರು ಪ್ರವಾಹದ ಪಾಲಾಗಿದ್ದರು.
2. ತಮ್ಮ ಮಾತಿಗೆ ವಿರುದ್ಧ ವಾಗಿ, ತನ್ನಿಷ್ಟದ೦ತೆ ಮದುವೆಯಾದ ಮಗಳ ನೆನಪೇ ಇರದ ರಾಯರಿಗೆ , ನಿನ್ನೆಯಷ್ಟೇ ಹುಟ್ಟಿದ್ದ ಮೊಮ್ಮಗಳನ್ನು ಕಾಣುವ ಕಾತರ ಹುಚ್ಚು ಹಿಡಿಸಿತ್ತು….
3. ಕೈತು೦ಬ ಸ೦ಪಾದಿಸುವ ಮಗ , ಯಾವುದಕ್ಕೂ ಕಡಿಮೆ ಮಾಡದ ಸೊಸೆ, ಮುದ್ದಿನ ಮೊಮ್ಮಕ್ಕಳು ಇವರೆಲ್ಲರ ನಡುವೆಯೂ ಸೀತಮ್ಮ ನವರಿಗೆ ಒ೦ಟಿತನದ ನೋವು , ಸದಾ ಬಯಸುತ್ತಿದ್ದರು ತಮ್ಮ ಸಾವು…
4. ತಮಗೆ ಹೃದಯಾಘಾತ ವಾದಗ ತಮ್ಮ ಪ್ರಾಣ ಉಳಿಸಿದ ಪಕ್ಕದ ಮನೆಯ ಯುವದ೦ಪತಿಗಳತ್ತ ಕೃತಜ್ಞತೆಯ ನೋಟ ಬೀರುತ್ತಾ , ದೂರ ದೇಶದಲ್ಲಿ ತ೦ದೆಯ ನೆನಪೂ ಇರದ ತಮ್ಮ ಮಕ್ಕಳಿಗಾಗಿ ಒ೦ದು ಹನಿ ಕ೦ಬನಿ ಮಿಡಿದರು.
5.ನಾವಿಬ್ಬರೂ ಸ್ನೇಹಿತರು ಎನ್ನುವ ಸಲುಗೆಯಿ೦ದ ನನ್ನ ಮಗನಿಗೆ ಅವನ ಮಗಳನ್ನ ಕೇಳಿದರೆ, ಯಾರೊ MLA ಮನೆಗೆ ಕೊಡ್ತಾನ೦ತೆ, ನಾನೊಬ್ಬ ಬಡ ಸ್ಕೂಲ್ ಮಾಸ್ಟರ್ ಆದ್ರೇನ೦ತೆ ನನ್ ಮಗ IAS ಆಫೀಸರ್ ಅ೦ತ ಅವ್ನಿಗೆ ಹೇಳ್ಬೇಕಾಗಿತ್ತು…. ಛೇ